ಮುಖಪುಟ ಮಧ್ಯಪ್ರದೇಶದ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗೆ ಕೋಮುವಾದ ಸ್ಪಿನ್ ನೀಡಲಾಗಿದೆ

ಮಧ್ಯಪ್ರದೇಶದ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗೆ ಕೋಮುವಾದ ಸ್ಪಿನ್ ನೀಡಲಾಗಿದೆ

ಮೂಲಕ: ಸೋಹಮ್ ಶಾ

ಸೆಪ್ಟೆಂಬರ್ 25 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಗಯಾಸುದ್ದೀನ್ ಎಂಬ ವಕೀಲರು ಬಾಗೇಶ್ವರ ಬಾಬಾ ಅವರ ಕಾರ್ಯಕ್ರಮದ ವಿರುದ್ಧ ತಪ್ಪು ಟ್ಯಾಗ್‌ನೊಂದಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಷ್ಟ್ ಅನ್ನು ಫೋಟೋ ತೋರಿಸುತ್ತದೆ. ಬಾಗೇಶ್ವರ್ ಬಾಬಾ ಅವರ ಕಾರ್ಯಕ್ರಮದ ವಿರುದ್ಧ ಗಯಾಸುದ್ದೀನ್ ಎಂಬ ವಕೀಲರು ಅರ್ಜಿ ಸಲ್ಲಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಷ್ಟ್ ಮಾಡಲಾಗಿದೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವಕೀಲ ಗುಡ್ಡ ಸಿಂಗ್ ಉದ್ದೆ ಅವರು ಪ್ರಕರಣವನ್ನು ದಾಖಲಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ತಪ್ಪಾಗಿ ಹೇಳಿಕೊಂಡಂತೆ ಗಯಾಸುದ್ದೀನ್ ಅಲ್ಲ.

ಹೇಳಿಕೆ ಏನು?

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿನ ಪೋಷ್ಟ್‌ಗಳು, ಸಂಭಾವ್ಯವಾಗಿ ಮುಸ್ಲಿಂ ಸಮುದಾಯದ ಸದಸ್ಯರಾದ ಗಯಾಸುದ್ದೀನ್ ಎಂಬ ವಕೀಲರು ಸ್ವಯಂ-ಘೋಷಿತ ಹಿಂದೂ ದೇವಮಾನವ ಬಾಗೇಶ್ವರ್ ಬಾಬಾ ಅವರನ್ನು ಒಳಗೊಂಡ ಕಾರ್ಯಕ್ರಮವನ್ನು ನಿಷೇಧಿಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿಕೊಂಡಿವೆ. ಈ ಪೋಷ್ಟ್‌ಗಳಲ್ಲಿ ನ್ಯಾಯಾಧೀಶರು ವಕೀಲರನ್ನು ಬೈಯುತ್ತಿರುವುದನ್ನು ಮತ್ತು ಪೀಠಕ್ಕೆ ಅಗೌರವ ತೋರಿದ್ದಕ್ಕಾಗಿ ನಿಂದನೆ ನೋಟಿಸ್ ನೀಡುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.

ಅಂತಹ ಒಂದು ಪೋಷ್ಟ್‌ನಲ್ಲಿ, “ಬಾಬಾ ಬಾಗೇಶ್ವರ್ ಅವರ ಕಥಾವನ್ನು ನಿಷೇಧಿಸಲು ಬುಡಕಟ್ಟು ಅನುಮತಿಯಿಲ್ಲದೆ ವಕೀಲ ಗಯಾಸುದ್ದೀನ್ ಜಬಲ್‌ಪುರ ಹೈಕೋರ್ಟ್‌ನಲ್ಲಿ PIL ಅನ್ನು ಸಲ್ಲಿಸಿದರು, ಅಂತಹ ಧಾರ್ಮಿಕ ಘಟನೆಗಳು ಬುಡಕಟ್ಟು ಸಮುದಾಯದ ಭಾವನೆಗಳಿಗೆ ನೋವುಂಟುಮಾಡುತ್ತವೆ ಎಂದು ವಾದಿಸಿದರು. ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಗಯಾಸುದ್ದೀನ್ ಅವರ ಅಸಭ್ಯ ಭಾಷೆಯಿಂದ ಕೋಪಗೊಂಡರು ಮತ್ತು ಅದರಂತೆ ವ್ಯವಹರಿಸಿದರು." ಈ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವಕೀಲರ ಹೆಸರು ಗಯಾಸುದ್ದೀನ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಷ್ಟ್ ಮಾಡಲಾಗಿದೆ. (ಮೂಲ: ಸ್ಕ್ರೀನ್‌ಶಾಟ್‌ಗಳು/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಪ್ರಶ್ನೆಯಲ್ಲಿರುವ ವಕೀಲರ ಹೆಸರು ಗಯಾಸುದ್ದೀನ್ ಅಲ್ಲ ಮತ್ತು ಅವರು ಮುಸ್ಲಿಂ ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ಸತ್ಯ ಏನು?

ಸಾಮಾಜಿಕ ಮಾಧ್ಯಮದ ಪೋಷ್ಟ್‌ಗಳಿಗೆ ಲಗತ್ತಿಸಲಾದ ವೀಡಿಯೋ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರನ್ನು ಒಳಗೊಂಡಿತ್ತು, ಪೋಷ್ಟ್‌ಗಳಲ್ಲಿ ಬಳಸಲಾದ ಪಠ್ಯ ಮೇಲ್ಪದರಗಳು ಮತ್ತು ಶೀರ್ಷಿಕೆಗಳಿಂದ ಸೂಚಿಸಲಾಗಿದೆ. ಈ ಮುನ್ನಡೆಯನ್ನು ಅನುಸರಿಸಿ, ನಾವು ಕೀವರ್ಡ್ ಸರ್ಚ್ ಅನ್ನು ನಡೆಸಿದ್ದೇವೆ ಮತ್ತು ಘಟನೆಯ ಕುರಿತು ಲೈವ್ ಲಾ (LiveLaw ) ಲೇಖನವನ್ನು ಕಂಡುಕೊಂಡಿದ್ದೇವೆ.

ನ್ಯಾಯಾಧೀಶರು ಹಿಂದಿಯಲ್ಲಿ (ಅನುವಾದಿತ) ಹೇಳಿದ್ದನ್ನು ಲೇಖನವು ಉಲ್ಲೇಖಿಸುತ್ತದೆ, "ನೀವು ಕೆಟ್ಟದಾಗಿ ವರ್ತಿಸುವ ಮೂಲಕ, ನಿಮಗಾಗಿ TRP ಗಳನ್ನು ಗಳಿಸುತ್ತೀರಿ ಎಂದು ನೀವು ಭಾವಿಸುತ್ತೀರಾ?" ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ, ನ್ಯಾಯಾಧೀಶರು ಅದೇ ಹೇಳಿಕೆಗಳನ್ನು ಹೇಳಿದ್ದಾರೆ ಮತ್ತು ಇದು ನಿಜವಾಗಿಯೂ ಅದೇ ಘಟನೆ ಎಂದು ದೃಢಪಡಿಸುತ್ತದೆ.

ಈ ಘಟನೆಯು ಮೇ ೨೨, ೨೦೨೩ ರಂದು ಸಂಭವಿಸಿದೆ ಮತ್ತು ಅರ್ಜಿದಾರರ ವಕೀಲರನ್ನು ಗಯಾಸುದ್ದೀನ್ ಅಲ್ಲ, ಜಿ.ಎಸ್ ಉದ್ದೆ ಎಂದು ಹೆಸರಿಸಲಾಗಿದೆ ಎಂದು ಈ ಲೇಖನವು ಗಮನಿಸುತ್ತದೆ. ಅರ್ಜಿದಾರರು ಧಾರ್ಮಿಕ ಕಾರ್ಯಕ್ರಮವನ್ನು ನಿಲ್ಲಿಸಲು ಕೋರಿದರು, ಇದು ಬುಡಕಟ್ಟು ಜನಾಂಗದ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ನಂಬಿದ್ದರು.

ನಾವು ಅದೇ ದಿನಾಂಕದ ತೀರ್ಪನ್ನು ಮಧ್ಯಪ್ರದೇಶ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಪತ್ತೆ ಮಾಡಿದ್ದೇವೆ, ಅದು ಅರ್ಜಿದಾರರ ಹೆಸರು 'ಜಿ.ಎಸ್. ಉದ್ದೆ.’ ನಮ್ಮ ಹುಡುಕಾಟದಿಂದ ಆತನ ಪೂರ್ಣ ಹೆಸರು ಗುಡ್ಡ ಸಿಂಗ್ ಉದ್ದೆ ಎಂದು ತಿಳಿದುಬಂದಿದೆ.

ಹೆಚ್ಚಿನ ದೃಢೀಕರಣಕ್ಕಾಗಿ, ಲಾಜಿಕಲಿ ಫ್ಯಾಕ್ಟ್ಸ್ ಅರ್ಜಿದಾರರನ್ನು ಸಂಪರ್ಕಿಸಿದರು, ಅವರು ತಮ್ಮ ಹೆಸರು ಗುಡ್ಡ ಸಿಂಗ್ ಉದ್ದೆ, ಗಯಾಸುದ್ದೀನ್ ಅಲ್ಲ ಮತ್ತು ಅವರು ಮುಸ್ಲಿಂ ಅಲ್ಲ ಎಂದು ದೃಢಪಡಿಸಿದರು. ಅವರು ತಮ್ಮ ಗುರುತನ್ನು ಪರಿಶೀಲಿಸಲು ಸಹಾಯ ಮಾಡಲು ಮಧ್ಯಪ್ರದೇಶ ಹೈಕೋರ್ಟ್ ಬಾರ್ ಅಸೋಸಿಯೇಷನ್ ಐಡಿ ಕಾರ್ಡ್‌ನ ಫೋಟೋವನ್ನು ಒದಗಿಸಿದರು.

ಗುಡ್ಡ ಸಿಂಗ್ ಉದ್ದೆಯನ್ನು ತೋರಿಸುವ ಎಂ.ಪಿ. ಹೈಕೋರ್ಟ್ ಬಾರ್ ಅಸೋಸಿಯೇಷನ್ ಐಡಿ ಕಾರ್ಡ್. (ಮೂಲ: ಗುಡ್ಡ ಸಿಂಗ್ ಉದ್ದೆ)

ಪ್ರಕರಣ ಏನಾಗಿತ್ತು?

ಲೈವ್‌ಲಾ ಪ್ರಕಾರ, SARWA ADIWASHI SAMAJ Vs. THE STATE OF MADHYA ಪ್ರದೇಶ, ವಕೀಲ ಜಿ.ಎಸ್. ಉದ್ದೆ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿದೆ. ಹಿಂದೂ ನಾಯಕ ಬಾಗೇಶ್ವರ್ ಬಾಬಾ ಅವರು ಕಥಾವಾಚನ್ ಅಥವಾ ಧಾರ್ಮಿಕ ಓದುವಿಕೆಯನ್ನು ನಡೆಸುವುದು ಬುಡಕಟ್ಟು ಸಮುದಾಯದ ನಂಬಿಕೆಗಳು ಮತ್ತು ಸಂಪ್ರದಾಯಗಳಿಗೆ ನೋವುಂಟುಮಾಡುತ್ತದೆ ಎಂದು ಅರ್ಜಿದಾರರು ವಾದಿಸಿದರು.

ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶರು ಮತ್ತು ವಕೀಲರ ನಡುವೆ ಅಹಿತಕರ ವಾಗ್ವಾದ ನಡೆಯಿತು, ಇದನ್ನು ಬಹು ಹಿಂದಿ ಸುದ್ದಿ ವರದಿಗಳು ಒಳಗೊಂಡಿವೆ. ಈ ವಾದದ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ, "ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಅರ್ಜಿದಾರರ ಪರ ವಕೀಲರು ತಮ್ಮ ಶಾಂತತೆಯನ್ನು ಕಳೆದುಕೊಂಡರು ಮತ್ತು ಕೋಪೋದ್ರೇಕವನ್ನು ತೋರಿಸಲು ಪ್ರಾರಂಭಿಸಿದರು" ಎಂದು ಗಮನಿಸಿದರು. ಈ ಹಂತದಲ್ಲಿ ನ್ಯಾಯಾಧೀಶರು ಅರ್ಜಿದಾರರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡುವುದಾಗಿ ಬೆದರಿಕೆ ಹಾಕಿದ್ದರು. ಅಂತಿಮವಾಗಿ, ಅರ್ಜಿಯನ್ನು "ಸರಿಯಾಗಿ ರಚಿಸಲಾದ ಅರ್ಜಿಯನ್ನು ಸಲ್ಲಿಸುವ ಸ್ವಾತಂತ್ರ್ಯ" ದೊಂದಿಗೆ ಹಿಂತಿರುಗಿಸಲಾಯಿತು.

ತೀರ್ಪು

ಸ್ವಯಂಘೋಷಿತ ಹಿಂದೂ ದೇವಮಾನವ ಬಾಗೇಶ್ವರ ಬಾಬಾ ಅವರ ಕಾರ್ಯಕ್ರಮವನ್ನು ನಿಷೇಧಿಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವಕೀಲರು ಗಯಾಸುದ್ದೀನ್ ಅಲ್ಲ, ಗುಡ್ಡ ಸಿಂಗ್ ಉದ್ದೆ. ಸುದ್ದಿ ವರದಿಗಳು, ನ್ಯಾಯಾಲಯದ ದಾಖಲೆಗಳು ಮತ್ತು ವಕೀಲರು ನಮ್ಮೊಂದಿಗೆ ಹಂಚಿಕೊಂಡ ಐಡಿಯಿಂದ ಇದು ದೃಢೀಕರಿಸಲ್ಪಟ್ಟಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ.)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ